ಶನಿವಾರ, ಜೂನ್ 6, 2015

ಭಕ್ತಿಗೀತೆ

ಗಣಪತಿ ನೀಡಲು ಅಭಯಾ
ಕಾರ್ಯಗಳೆಲ್ಲ ವಿಜಯ
ಕರಿಮುಖನೊಲಿದರೆ ಇಲ್ಲ ಅಪಾಯ
ಭಕ್ತಿಯೆ ಗಣಪನು ಒಲಿವ ಉಪಾಯ

ಕರುಣಾಸಾಗರ ಗಜಮುಖನ
ಶರಣು ಹೊಂದಿದೆ ಭಕ್ತಜನ
ಆಲಿಸಿ ಮೊರೆಯನು ಈ ಕ್ಷಣ
ಪಾಲಿಸಿ ಪೊರೆವನು ದಯಾಘನ

ಚೆಲುವ ಚೆನ್ನಿಗನೆ ನಂಬಿದೆ ನಾ
ಚೆಲ್ಲು ಪ್ರೇಮದ ಹೊಂಗಿರಣ
ಕಾಣೆನು ನಿನಗೆ ಸರಿಸಮನ
ಕಾಯುವ ದೈವವು ನೀನೆ ಕಣಾ

ಗಣಪತಿ ನೀಡಲು ಅಭಯಾ
ಕಾರ್ಯಗಳೆಲ್ಲ ವಿಜಯ
ಕರಿಮುಖನೊಲಿದರೆ ಇಲ್ಲ ಅಪಾಯ
ಭಕ್ತಿಯೆ ಗಣಪನು ಒಲಿವ ಉಪಾಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ